ತುಸುತುಸುವೇ ಹತ್ತಿರವಾಗುವ
ಕ್ರೂರ ಸಾವಿನ ಸಂಬಂಧ
ಪಾಶವೀ ಆಕ್ರಮಣ,
ವಿರಹದ ಬಿಸಿ ಮೀರಿ
ಹೊರ ಬರುವ ಕರುಳ ಸಂಬಂಧ,
ಬದುಕು ಮುದುಡುವಂತೆ
ಬೀರುವ ಸುಡು ನೋಟ,
ಬದುಕಿನ ಆಳ – ಅಗಲ
ಏರುಪೇರಿನಲಿ ಏಕುತ್ತ
ಎಳೆದು ತಂದ ಬಾಳಬಂಡಿ
ಮನೆ ಮಂದಿಗೆಲ್ಲ ಬಡಿಸಿ,
ಬರಿಹೊಟ್ಟೆ ಖಾಲಿ ತಟ್ಟೆ
ಬರೀ ನೀರು ಗತಿಯಾಗಿ
ತೃಪ್ತಿ ಮರೀಚಿಕೆ
ಕ್ರೌರ್ಯ ಪುನರಾವರ್ತನೆ
ತಾಳದೇ ತತ್ತರಿಸಿ
ಕುಸಿದಾಗ ಭೂಮಿಗೆ,
ಸಾವು ನೋವಿನ ಸೆಣಸಾಟ,
ನಾಯಕಿಗೆ ದುರಂತದ
ಬಾಯ್ತೆರೆದ ಭೂಮಿಯಲಿ
ಹುಡಿಯಾಗಿ ಒಡಲು ಸೇರಿ
ಮೊರೆ ಹೋಗಿ ಚಿರನಿದ್ರೆ,
ಹೇಳಿದಳು ಕೊನೆ ವಿದಾಯ
ನೋವು ಕ್ರೌರ್ಯಗಳಿಗೆ
*****
Related Post
ಸಣ್ಣ ಕತೆ
-
ಬೂಬೂನ ಬಾಳು
ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…
-
ಕರಾಚಿ ಕಾರಣೋರು
ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…
-
ಕಲಾವಿದ
"ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…
-
ರಾಧೆಯ ಸ್ವಗತ
ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…
-
ಮುಗ್ಧ
ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…